Archive
ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ
Published in http://www.nilume.wordpress.com ಸಂಸ್ಕೃತಿ ಸಂಕಥನ – ೬
- ರಮಾನಂದ ಐನಕೈ
ಸಂಶೋಧನೆ ಅಂದರೆ ಏನು? ಇತ್ತೀಚಿನ ದಿನಗಳಲ್ಲಿ ಯಾರಾದರೂ ಸಂಶೋಧನೆ ಮಾಡಿದ್ದಾರೆ ಅಥವಾ ಪಿ.ಎಚ್.ಡಿ. ಪದವಿ ಪಡೆದಿದ್ದಾರೆಂದರೆ ನಗು ಬರುತ್ತದೆ. ನೌಕರಿ ಪಡೆಯಲು ಅಥವಾ ನೌಕರಿಯಲ್ಲಿ ಬಡ್ತಿ ಪಡೆಯಲು ಈ ಪಿ.ಎಚ್.ಡಿ. ಅರ್ಹತೆಯಾಗುತ್ತದೆಯೆಂಬ ಕಾರಣಕ್ಕೆ ಮಾಡುತ್ತಾರೆಯೇ ವಿನಾ ಆಸಕ್ತಿಗಾಗಿ ಅಲ್ಲ. ನಮ್ಮ ವಿಶ್ವವಿದ್ಯಾಲಯಗಳ ಸಂಶೋಧನಾ ವಿಭಾಗಗಳಿಗೆ ಈ ದುರ್ಗತಿ ಬಂದಿದೆ. ಹಣ ಕೊಟ್ಟರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೇ ಪ್ರಬಂಧ ಬರೆದು ಪದವಿ ಕೊಡುತ್ತಾರೆ. ಪಿ.ಎಚ್.ಡಿ. ಎಂಬುದು ವ್ಯಾಪಾರವಾಗಿದೆ. ಸಂಶೋಧನೆಗೆ ಆಯ್ದುಕೊಳ್ಳುವ ವಿಷಯವಾದರೂ ಎಂಥದ್ದು. ಯಾರಿಗೂ ಪ್ರಯೋಜನವಾಗದ ವಿಷಯ. ಸಂಶೋಧನಾ ಪ್ರಬಂಧವನ್ನು ನೆಟ್ಟಗೆ ಮೂರು ಜನರು ಓದಲಾರರು. ಈ ರೀತಿಯ ಸಂಶೋಧನೆಗಳಿಂದ ಅಥವಾ ಸಂಶೋಧಕರಿಂದ ದೇಶಕ್ಕೆ ಏನಾದರೂ ಪ್ರಯೋಜನ ಇದೆಯಾ?
ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ. ಶಿರಸಿಯ ಗಣಪತಿ ದೇವಸ್ಥಾನದ ಹತ್ತಿರವಿರುವ ಶಂಕರಹೊಂಡದ ಸ್ವಚ್ಛತಾ ಕಾರ್ಯಕ್ರಮ ನಡೆಯತ್ತಿತ್ತು. ಆಗ ಒಂದು ಪುಟ್ಟ ವಿಗ್ರಹ ಸಿಕ್ಕಿತು. ಕ್ಷಣಾರ್ಧದಲ್ಲಿ ಇಡೀ ಶಿರಸಿ ನಗರ ವ್ಯಾಪಿಸಿತು ಈ ಸುದ್ದಿ. ಅಷ್ಟರಲ್ಲಿ ಇತಿಹಾಸ ಸಂಶೋಧಕನೊಬ್ಬ ಅಲ್ಲಿಗೆ ಬಂದ ಆತ ಆಗಷ್ಟೇ ಅರೆಕಾಲಿಕ ಇತಿಹಾಸ ಉಪನ್ಯಾಸಕನಾಗಿ ಸೇರಿದವ. ಆಗಲೇ ಹೆಸರಿನ ಹಿಂದೆ ಪ್ರೊಫೆಸರ್ ಎಂದು ಬಳಸುತ್ತಿದ್ದ. ಆತ ಈ ವಿಗ್ರಹವನ್ನು ಕೂಲಂಕಶವಾಗಿ ಪರಿಶೀಲಿಸಿ ಅದರ ಕುರಿತು ಪತ್ರಿಕಾ ಪ್ರಕಟಣೆ ನೀಡಿದ.
ಶಾತವಾಹನರ ಕಾಲದ ವಿಗ್ರಹವೆಂದು ನೂರೆಂಟು ವಿವರಗಳು ಅದರಲ್ಲಿ ಇದ್ದವು. ಪ್ರಕಟವಾಯಿತು. ಆದರೆ ಎರಡೇ ದಿನಗಳಲ್ಲಿ ಅವೇ ಪತ್ರಿಕೆಗಳಲ್ಲಿ ಪುನಃ ಸುದ್ದಿ ಬಂತು. ಶಂಕರ ಹೊಂಡದಲ್ಲಿ ಸಿಕ್ಕಿದ್ದು ಶಾತವಾಹನರ ಕಾಲದ ವಿಗ್ರಹವಲ್ಲ ಎಂಬ ತಲೆ ಬರಹವಿತ್ತು. ವಿಷಯ ಏನೆಂದರೆ ಶಂಕರ ಹೊಂಡ ಸ್ವಚ್ಛ ಮಾಡುವ ಒಂದು ವರ್ಷದ ಮೊದಲು ಅಲ್ಲೇ ಪಕ್ಕದಲ್ಲಿ ವಾಸಿಸುವ ಗೃಹಸ್ಥನೊಬ್ಬ ಕುಮಟಾದಿಂದ ವಿಗ್ರಹವೊಂದನ್ನು ಖರೀದಿಸಿ ತಂದಿದ್ದ. ಅಷ್ಟರ ನಂತರ ಅವನ ಮನೆಯಲ್ಲಿ ಅವಘಡಗಳೇ ಜರುಗಿದವು. ಕಂಗಾಲಾದ ಆತ ಜ್ಯೋತಿಷಿಗಳೊಬ್ಬರಲ್ಲಿ ಮೊರೆ ಹೋದ. ವಿಗ್ರಹದ ಕಾರಣದಿಂದ ಮನೆಯಲ್ಲಿ ತ್ಡೊಂದರೆಯಾಗಿದೆ. ಆದ್ದರಿಂದ ಆ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಿಬಿಡು ಎಂದು ಜ್ಯೋತಿಷಿಗಳು ಸಲಹೆ ನೀಡಿದರು. ಗ್ರಹಸ್ಥ ಆ ಮೂರ್ತಿಯನ್ನು ಶಂಕರ ಹೊಂಡದೊಳಗೆ ಮುಳುಗಿಸಿದ. ಒಂದು ವರ್ಷದ ಹಿಂದಿನ ವಿಗ್ರಹ ಇತಿಹಾಸ ಸಂಶೋಧಕನ ಪ್ರತಿಭೆಯಲ್ಲಿ ಒಂದು ಸಾವಿರ ವರ್ಷ ಹಿಂದಿನ ವ್ಯಾಖ್ಯಾನ ಪಡೆಯಿತು! ಸಂಶೋಧನೆ ಯಾಕೆ ಮಾಡಬೇಕು? ಹೇಗೆ ಮಾಡಬೇಕು? ಅದರಿಂದ ಯಾರಿಗೆ ಪ್ರಯೋಜನ? – ಇತ್ಯಾದಿ ಹಲವಾರು ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ.
ಸಂಶೋಧನೆಗಳಿಗೂ ಸಮಾಜಕ್ಕೂ ಏನಾದರೂ ಸಂಬಂಧ ಇದೆಯೇ? ಅನೇಕ ಸಂದರ್ಭಗಳಲ್ಲಿ ಸಂಶೋಧಕರಿಗೂ ಹಾಗೂ ಅವರ ಸಂಶೋಧನೆಗೂ ಕೂಡ ಸಂಬಂಧ ಇರಲಾರದು. ಹೀಗಾದಾಗ ಸಮಾಜದಲ್ಲಿ ಒಂದು ಸುಸಂಬದ್ಧವಾದ ಚಿಂತನಾಕ್ರಮ ಬೆಳೆಯಲು ಸಾಧ್ಯವಿಲ್ಲ. ಯಾರೋ ಹೇಳಿದ ವಿಚಾರಗಳನ್ನು ನಕಲು ಮಾಡಿ ನಕಲು ಮಾಡಿ ಕೊನೆಗೆ ಆ ವಿಚಾರ ಯಾರಿಗೂ ಅರ್ಥವಾಗದ ಹ0ತ ತಲುಪಿಬಿಡುತ್ತದೆ.
ಹಾಗಾಗಿ ಈ ದೇಶದಲ್ಲಿ ಸಂಶೋಧನಾ ಕಾರ್ಯಕ್ರಮಕ್ಕೆ ಪುನರುಜ್ಜೀವನ ನೀಡಬೇಕಾಗಿದೆ. ಇಂಥ ಕೆಲಸ ಮಾಡುತ್ತಿರುವ ಸಂಶೋಧನಾ ಕೇಂದ್ರ ಅಂದರೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿರುವ ಸಂಶೋಧನಾ ಕೇಂದ್ರ ಅಂದರೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿರುವ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಈ ಕೇಂದ್ರ ಕುವೆಂಪು ವಿಶ್ವವಿದ್ಯಾಲಯ ಬೆಲ್ಜಿಯಂನ ಗೆಂಟ್ ವಿಶ್ವವಿದ್ಯಾಲಯದ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ ವಿಭಾಗದ ಸಹಭಾಗಿತ್ವದಲ್ಲಿ ಅಸ್ತಿತ್ವಕ್ಕೆ ಬಂದಿದೆ. ವಿಶ್ವವಿದ್ಯಾಲಯಗಳ ಸಂಶೋಧನಾ ಕೇಂದ್ರ ಹೇಗಿರಬೇಕೆಂಬುದಕ್ಕೆ ಮಾದರಿ ಇದು. ಜಗತ್ತಿನಲ್ಲೇ ಅದ್ಭುತ ಸಂಶೋಧನಾ ಮಾರ್ಗದರ್ಶಕರೆಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರೊ. ಬಾಲಗಂಗಾಧರರ ಸಂಕಲ್ಪದ ಫಲ ಈ ಕೇಂದ್ರ. ಒಂದು ರೀತಿಯ ಗುರುಕುಲ ಮಾದರಿಯ ಮಾರ್ಗದರ್ಶನ ಇಲ್ಲಿದೆ. ಸಂಶೋಧನೆ ಮಾಡಲೇಬೇಕೆಂಬ ಪ್ರಬಲ ಇಚ್ಛೆ ಇದ್ದವರಿಗೆ ಮಾತ್ರ ಇಲ್ಲಿ ಪ್ರವೇಶ. ಪ್ರವೇಶಕ್ಕಾಗಿ ಮುನ್ನ ಕಠಿಣ ಪರೀಕ್ಷೆ!
ಇಲ್ಲಿ ಆಯ್ದುಕೊಳ್ಳಬಹುದಾದ ವಿಷಯ ಸಮಾಜವಿಜ್ಞಾನಕ್ಕೆ ಸಂಬಂಧಪಟ್ಟಿದ್ದಾಗಿರಬೇಕು. ಸದ್ಯದ ಭಾರತೀಯ ಸಮಾಜವಿಜ್ಞಾನ ವಸಾಹತು ನಿರೂಪಣೆಯಿಂದ ವಿಕೃತವಾಗಿದೆ. ಇದರಿಂದ ಬಿಡುಗಡೆಗೊಳಿಸುವುದೇ ಇಲ್ಲಿನ ಸಂಶೋಧನೆಗಳ ಮುಖ್ಯ ಗುರಿ. ನಮ್ಮ ನಡುವಿನ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವಂಥ ಶಿಕ್ಷಣ ಮತ್ತು ಸಂಶೋಧನಾಕಾರ ರೂಪಿಸುವಲ್ಲಿ ಅಂತಾರಾಷ್ಟ್ರಿಯ ಮನ್ನಣೆ ಪಡೆಯುವತ್ತ ಸಾಗಿದೆ ಈ ಅಧ್ಯಯನ ಕೇಂದ್ರ. ಈ ಕೇಂದ್ರದ ಧ್ಯೇಯ ಗಮನ ಸೆಳೆಯುವಂತಿದೆ.
* ಜಾತಿ/ಅಸಮಾನತೆ, ಬಹುತ್ವ/ಸಂಘರ್ಷಗಳ ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನು ಕೈಗೆತ್ತಿಕೊಳ್ಳುವುದು.
* ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರಿಯ ಮಟ್ಟದ ಸಮಾಜಶಾಸ್ತ್ರೀಯ ಸಂಶೋಧನೆಯ ಕೌಶಲ್ಯಗಳನ್ನು ಕಲಿಸುವುದು.
* ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂರ್ಘಗಳನ್ನು ಬಗೆಹರಿಸುವ ಮಾರ್ಗೋಪಾಯಗಳನ್ನು ಸ್ಥಾನಿಕ ಸಮುದಾಯಗಳು ಸಾಂಪ್ರದಾಯಿಕವಾಗಿ ಪೋಷಿಸಿಕೊಂಡು ಬಂದಿರುವ ಜ್ಞಾನದ ಸಹಾಯದಿಂದ ರೂಪಿಸುವುದು.
* ಅಭಿವೃದ್ಧಿಪರ ನೀತಿಗಳಲ್ಲಿ ಹಾಗೂ ರಾಜ್ಯದ ಕಾರ್ಯಕ್ರಮಗಳಲ್ಲಿ ಳೀಯ ಸಾಂಸ್ಕೃತಿಕ ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನು ಕೈಗೆತ್ತಿಕೊಳ್ಳುವುದು.
* ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರಿಯ ಮಟ್ಟದ ಸಮಾಜಶಾಸ್ತ್ರೀಯ ಸಂಶೋಧನೆಯ ಕೌಶಲ್ಯಗಳನ್ನು ಕಲಿಸುವುದು.
* ಸಾಮಾಜಿಕ ಹಾಗೂ ಸಾಸಂಕೃತಿಕ ಸಂಘರ್ಷಗಳನ್ನು ಬಗೆಹರಿಸುವ ಮಾರ್ಗೋಪಾಯಗಳನ್ನು ಸ್ಥಾನಿಕ ಸಮುದಾಯಗಳು ಸಾಂಪ್ರದಾಯಿಕವಾಗಿ ಪೋಷಿಸಿಕೊಂಡು ಬಂದಿರುವ ಜ್ಞಾನದ ಸಹಾಯದಿಂದ ರೂಪಿಸುವುದು.
*ಅಭಿವೃದ್ಧಿಪರ ನೀತಿಗಳಲ್ಲಿ ಹಾಗೂ ರಾಜ್ಯದ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ಸಮಸ್ಯೆಗಳು ಯಾವ ರೀತಿಯ ಪ್ರಭಾವವನ್ನು ಬೀರುತ್ತವೆ ಎಂಬ ವಿಷಯದ ಕುರಿತು ಬೆಳಕು ಚೆಲ್ಲುವುದು.
ಸ್ಥಾನಿಕ ಸಮುದಾಯಗಳು, ಸ್ಥಾನಿಕ ಆಡಳಿತ ಟಕಗಳು, ಕಾನೂನನ್ನು ರೂಪಿಸುವವರು ಹಾಗೂ ಸರಕಾರೇತರ ಸಂಸ್ಥೆಗಳ ನಡುವೆ ಕೊಡುಕೊಳ್ಳುವಿಕೆಯ ಸಂಬಂಧವನ್ನೇರ್ಪಡಿಸುವುದು. ಹೀಗೆ ಇವರ ಸಂಶೋಧನೆ ಅಂದರೆ ಪುಸ್ತಕ ಬರೆಯುವುದರಲ್ಲಿ ಅದೊಂದು ಸಮಾಜಮುಖಿ ಕಾರ್ಯಕ್ರಮ.
ಇವರ ಸಂಶೋಧನೆ ಅಂದರೆ ಕೇವಲ ವಿಶ್ವವಿದ್ಯಾಲಯದ ಕೊಠಡಿಗಳಲ್ಲಿ ಮಾಡುವ ಅಧ್ಯಯನವಲ್ಲ. ಜನರ ಜೊತೆ ಸಮಾಜದ ಜೊತೆ ನಡೆಸುವ ಸಂವಹನ. ಹಾಗಾಗಿ ಇವರಿಗೆ ಜನರ ಜೊತೆ ಸಂವಾದ ಅನಿವಾರ್ಯ. ಜನರ ಅಹವಾಲುಗಳನ್ನು ಸ್ವೀಕರಿಸುತ್ತ ಅವಕ್ಕೆ ಉತ್ತರ ನೀಡುತ್ತ ಜನರಿಂದಲೂ ಕಲಿಯುತ್ತ ವಿಚಾರ ರೂಪಿಸಿಕೊಳ್ಳುತ್ತ ಬೆಳೆಯುವುದೇ ಇವರ ಸಂಶೋಧನಾ ಕ್ರಮ. ಒಂದು ರೀತಿಯಲ್ಲಿ ವಿಶ್ವವಿದ್ಯಾಲಯ ಜನರ ಜೊತೆ ನಡೆಸುವ ಸಂವಾದ ಇದು. ಇಲ್ಲಿ ಪರಸ್ಪರ ವಿಚಾರಗಳ ವಿನಿಮಯ ಹಾಗೂ ಅನುಭವಗಳ ಬಳಕೆಯಿಂದ ತಿಳುವಳಿಕೆ ಹೆಚ್ಚಲು ಸಾಧ್ಯ. ಈ ತಿಳುವಳಿಕೆ ಅವರವರ ನೆಮ್ಮದಿಗೆ ನಾಂದಿಯಾಗಬೇಕೆಂಬುದೇ ಇವರ ಬಯಕೆ. ನಿಜಕ್ಕೂ ಈ ಸಂಶೋಧನಾ ಕೇಂದ್ರ ದೇಶದಲ್ಲೇ ಅಪರೂಪದ್ದು.
ಇದನ್ನೆಲ್ಲ ಅರಿತಾಗ ನಾವೆಷ್ಟು ಬೌದ್ಧಿಕ ಬಡವರಾಗಿದ್ದೇವೆಂಬುದು ಗೊತ್ತಾಗುತ್ತದೆ. ನಮಗೆ ಸರಿಯಾದ ಓದಿನ ಕ್ರಮ ಗೊತ್ತಿಲ್ಲ. ತರ್ಕ ಉಪಯೋಗಿಸಿ ವಾದ ಬೆಳೆಸುವ ರೀತಿ ಗೊತ್ತಿಲ್ಲ. ನಮಗೊಂದು ನಿರ್ಧಿಷ್ಟ ಚಿಂತನಾಕ್ರಮ ಇಲ್ಲ. ಗೃಹಿಕೆಯ ಸೂಕ್ಷ್ಮತೆ ಇಲ್ಲ. ಹೀಗಿದ್ದಾಗ ನಾವು ಮಾಡುವ ಸಂಶೋಧನೆಗಿಗೆ ಕವಡೆ ಕಿಮ್ಮತ್ತು ಬರಲು ಸಾಧ್ಯವೇ? ಈ ಕಾರಣಕ್ಕಾಗೇ ಇಂದು ನಮ್ಮ ಎಲ್ಲ ವಿಶ್ವವಿದ್ಯಾಲಯಗಳ ಸಂಶೋಧನೆಗಲು ಗುಜರಿ ವ್ಯಾಪಾರವಾಗಿದೆ. ಇದು ಬದಲಾಗಬೇಕೆಂಬುದು ಬಾಲಗಂಗಾಧರ ಕನಸು. ವರ್ಷಕ್ಕೆರಡು ಸಾರಿ ಇವರೇ ಸಂಸ್ಕೃತಿ ಅಧ್ಯಯನ ಕೇಂದ್ರಕ್ಕೆ ಬಂದು ಮಾರ್ಗದರ್ಶನ ನೀಡುತ್ತಾರೆ. ಬಾಲಗಂಗಾಧರರ ಹತ್ತಿರ ಸೈ ಅನಿಸಿಕೊಗಿಂಡು ಸಂಶೋಧನೆಗೆ ನೊಂದಣಿ ಮಾಡಿಕೊಳ್ಳುವುದೊಗಿಂದು ಹರಸಾಹಸ. ವರ್ಷಾನುಗಟ್ಟಲೇ ವಿದ್ಯಾರ್ಥಿಿಗಳ ಆಸಕ್ತಿಯನ್ನೇ ಒರೆಗೆ ಹಚ್ಚುತ್ತಾರೆ ಅವರು. ಸಂಶೋಧನಾ ವಿದ್ಯಾರ್ಥಿಗೆ ಬೇಕಾದ ಅರ್ಹತೆಗಳನ್ನೆಲ್ಲ ಪಡೆದುಕೊಂಡ ಮೇಲೆ ಅನುಮತಿ ನೀಡುತ್ತಾರೆ. ಆದ್ದರಿಂದ ಕೇವಲ ಉದ್ಯೋಗಾಕಾಂಕ್ಷೆಯಿಂದ ಸಂಶೋಧನೆಗೆ ಬರುವವರಿಗೆ ಇದು ಕಠಿಣ ಸ್ಥಳ.
ಕರ್ನಾಟಕದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಗುಣಾತ್ಮಕ ಸಂಶೋಧನೆ ನಡೆಸಲು ಹಲವಾರು ತೊಂದರೆ ಇದೆ. ಮೊದಲನೆಯದಾಗಿ ಭಾಷಾ ಸಮಸ್ಯೆ. ಕನ್ನಡದಲ್ಲಿ ಆಕರ ಗ್ರಂಥಗಳು ಸಿಗುವುದು ಕಷ್ಟ. ಹಾಗಾಗಿ ಭಾಷಾಂತರ ಕಾರ್ಯಕ್ರಮವು ಇವರ ಗುರಿಯಾಗಿದೆ. ಸಮಾಜ ವಿಜ್ಞಾನದ ಪಠ್ಯಗಳ ಕನ್ನಡಾನುವಾದ ಮಾಡುತ್ತಿದ್ದಾರೆ. ಜಾತಿ, ಅಸಮಾನತೆ, ಬಹುತ್ವ ಹಾಗೂ ಸಂಘರ್ಷಗಳ ಸಂಶೋಧನೆಗೆ ಸಂಬಂಧಿಸಿ ವಿಶೇಷವಾದ ಗ್ರಂಥಾಲಯವೊಂದನ್ನು ಬೆಳೆಸುತ್ತಿದ್ದಾರೆ. ಅದೂ ಅಲ್ಲದೇ ಈ ಕೇಂದ್ರ ಭಾರತದ ಸಮಾಜ ವಿಜ್ಞಾನಗಳನ್ನು ಕಾಡುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳನ್ನು ಗುರುತಿಸಿದೆ.
1) ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆಯ ಶಿಸ್ತು ಬಹುತೇಕ ಕಾಣೆಯಾಗಿದೆ.
2) ಸ್ಥಾನಿಕ ಸಮುದಾಯಗಳು ಹಾಗೂ ಸಮಾಜ ವಿಜ್ಞಾನದ ಸಿದ್ಧಾಂತಗಳ ನಡುವಿನ ಸಂಬಂಧ ಕಡಿದು ಹೋಗಿದೆ.
3) ಸಂಶೋಧನೆಗೆ ಅವಶ್ಯವಿರುವ ಸೂಕ್ತ ತರಬೇತಿಯ ಕೊರತೆಯಿದೆ.
4) ಸಂಶೋಧನೆಗೆ ಅಗತ್ಯವಿರುವ ಮಾಹಿತಿಗಳು ಸರಿಯಾಗಿ ಲಭ್ಯವಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಎದುರಿಸುವ ಸಲುವಾಗಿ ಸಂಶೋಧಕರ ತಂಡವನ್ನು ಹುಟ್ಟುಹಾಕಿ ಅವರಿಗೆ ಅತ್ಯುತ್ತಮವಾದ ಸಂಶೋದನಾ ವಿಧಾನಗಳಲ್ಲಿ ತರಬೇತಿ ನೀಡಿ ಅವರನ್ನು ಸ್ಥಳೀಯ ಸಮಾಜಗಳ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸುವಂತೆ ಪ್ರೇರೇಪಿಸುವುದು ಈ ಕೇಂದ್ರದ ಬಹು ಮಹತ್ವದ ಉದ್ದೇಶ. ಶಿವಮೊಗ್ಗದ “ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ” ಎಲ್ಲ ವಿಶ್ವವಿದ್ಯಾಲಯಗಳಿಗೂ ಮಾದರಿಯಾಗಲಿ
ಸಂಪ್ರದಾಯಗಳ ಸುತ್ತ
ಸಂಸ್ಕೃತಿ ಸಂಕಥನ – ೩
ವಿದ್ಯಾವಂತರೆನಿಸಿಕೊಂಡ ನಮಗೆಲ್ಲ ಒಂದು ತೊಂದರೆ ಇದೆ. ಅದೇನೆಂದರೆ ನಮ್ಮ ಜೀವನಶೈಲಿಯೊಂದಿಗೆ ಅನಿವಾರ್ಯವಾಗಿ ಪಾಲಿಸಲೇಬೇಕಾದ ಸಂಪ್ರದಾಯಗಳು. ಇದನ್ನು ಪಾಲಿಸದಿದ್ದರೆ ನಾವು ಸಮುದಾಯದಿಂದ ಹೊರಗುಳಿಯತ್ತೇವೆ. ಕೆಲವೊಮ್ಮೆ ಮಾನಸಿಕವಾಗಿ ನಮ್ಮೊಳಗೇ ಅಭದ್ರತೆಗೊಳಗಾಗುತ್ತೇವೆ. ಹಾಗಂತ ಸಂಪ್ರದಾಯವನ್ನು ಪಾಲಿಸಲು ನಮ್ಮ ವೈಚಾರಿಕತೆ ಅನುವು ಮಾಡಿಕೊಡುವುದಿಲ್ಲ. ನಾವು ಭೌತಿಕವಾಗಿ ಬದುಕುತ್ತಿರುವುದು ಸಂಪ್ರದಾಯದ ಸಮಾಜದಲ್ಲಿ. ಮಾನಸಿಕವಾಗಿ ಬದುಕುತ್ತಿರುಉವದು ವೈಚಾರಿಕತೆಯೆಂಬ ಭ್ರಮೆಯಲ್ಲಿ. ಯಾಕೆ ಹೀಗಾಗುತ್ತಿದೆ? ನಮ್ಮ ಸಂಪ್ರದಾಯಗಳಲ್ಲಿ ನಮಗೇಕೆ ಅರ್ಥ ಕಾಣುತ್ತಿಲ್ಲ? ಅಥವಾ ಅರ್ಥ ಹುಡುಕುವ ಹಠವಾದರೂ ಏಕೆ? ಇವುಗಳಿಗೆಲ್ಲ ಅರ್ಥ ಇರಲೇಬೇಕೆಂದಿದೆಯೇ? ಸ್ವತಂತ್ರ ಭಾರತದ 60 ವರ್ಷ ಕಳೆದರೂ ಇಂಥ ಗೊಂದಲಗಳಿಂದ ಮುಕ್ತರಾಗದೇ ಇದ್ದದ್ದು ನಿಜಕ್ಕೂ ಗಂಭೀರವಾಸ್ತವ.
ಸಂಪ್ರದಾಯ ಅಂದರೆ ತಲೆತಲಾಂತರದಿಂದ ನಡೆಸಿಕೊಂಡು ಬಂದ ಆಚರಣೆಗಳು. ನಮ್ಮ ಹಿರಿಯರು ಅವರ ಹಿರಿಯರನ್ನು ಅನುಕರಿಸಿದರು. ಅವರ ಹಿರಿಯರು ಅವರ ಹಿರಿಯರನ್ನು… ಹೀಗೆ ಯಾಕೆ ಆಚರಿಸಬೇಕೆಂದು ಯಾರೂ ಯಾರನ್ನೂ ಪ್ರಸ್ನಿಸಲಿಲ್ಲ. ಪ್ರಶ್ನಿಸುವ ಜಿಜ್ಞಾಸ ಹುಟ್ಟಲೇ ಇಲ್ಲ. ಏಕೆಂದರೆ ಎಲ್ಲರೂ ಅದು ತಮ್ಮದು ಎಂದು ನಂಬಿದ್ದರು. ಪ್ರೀತಿಸುತ್ತಿದ್ದರು. ಸ್ವಾತಂತ್ರ್ಯಾನಂತರ ನಮಗೆ ಸಂಪ್ರದಾಯಗಳ ಕುರಿತು ಹೆಚ್ಚು ಪ್ರಶ್ನೆಗಳು ಏಳಲು ಶುರುವಾಗಿವೆ. ಅದಕ್ಕೆ ಕಾರಣ ನಾವು ಪ್ರಭಾವಿಸಿಕೊಂಡ ಎರವಲು ವೈಚಾರಿಕತೆ ಅಥವಾ ವಿಚಾರವಾದ. ಅದು ನಮ್ಮ ಶಿಕ್ಷಣ ಹಾಗೂ ಓದುತ್ತಿರುವ ಸಮಾಜವಿಜ್ಞಾನಗಳಿಂದ ಸೃಷ್ಟಿಯಾದದ್ದು. ಪರೋಕ್ಷವಾಗಿ ಹೇಳಬಹುದಾದರೆ ಪಾಶ್ಚಾತ್ಯರು ಹೇಳಿಕೊಟ್ಟ ಕಂಠಪಾಠ. ಅವರ ಪ್ರಕಾರ ವೈಚಾರಿಕತೆಯತ್ತ ಸಾಗುವುದೇ ಪ್ರಗತಿ ಅಥವಾ ನಾಗರಿಕತೆಯ ಲಕ್ಷಣ. ಭಾರತೀಯ ಸಂಪ್ರದಾಯಗಳು (ಹಿಂದೂ ರಿಲಿಜನ್) ಅವೈಚಾರಿಕವಾದ್ದರಿಂದ ಭಾರತ ಹಿಂದುಳಿದ ದೇಶ. ಇಲ್ಲಿಯ ಜನ ಮೂಢರು ಮತ್ತು ದಡ್ಡರು. ಅರ್ಥವಿಲ್ಲದ ಆಚರಣೆಗಳನ್ನು ಮಾಡುವವರು ಎಂಬಿತ್ಯಾದಿ. ಇದೇ ನಿಜ ಎಂದು ನಾವೆಲ್ಲ ನಂಬಿಕೊಂಡಿದ್ದರಿಂದ ನಮ್ಮ ಸಂಪ್ರದಾಯಗಳು ನಮಗೆ ಅರ್ಥಹೀನ ಅನಿಸುತ್ತದೆ.
ದುರಂತ ಅಂದರೆ ಭಾರತದಲ್ಲೀಗ ಎರಡು ಪಂಗಡಗಳಾಗಿವೆ. ಪ್ರಗತಿಪರರು ಮತ್ತು ಪ್ರತಿಗಾಮಿಗಳು.ಇಲ್ಲಿ ಸಂಪ್ರದಾಯವನ್ನು ಪ್ರಶ್ನಿಸುವವರು ಹಾಗೂ ವಿರೋಧಿಸುವವರು ಪ್ರಗತಿಪರರು.ಬಹಳಷ್ಟು ಪ್ರಗತಿಪರರಿಗೆ ಇದೊಂದೇ ಬಂಡವಾಳ. ಇವರೇ ಸಂಪ್ರದಾಯಗಳನ್ನು ಸಮರ್ಥಿಸುವವರನ್ನು ಪ್ರತಿಗಾಮಿಗಳು ಎಂದು ನಾಮಕರಣ ಮಾಡಿದ್ದಾರೆ. ಸಂಪ್ರದಾಯ ಮೂಢನಂಬಿಕೆಗಳನ್ನು ಪೋಷಿಸುತ್ತದೆ. ಹಿಂದಿನವರು ಮಾಡಿದರೆಂಬ ಕಾರಣಕ್ಕೆ ನಾವು ಕೆಲವು ಆಚರಣೆಗಳನ್ನು ಮಾಡುತ್ತೇವೆಯೇ ವಿನಾ ಅದನ್ನು ಏಕೆ ಮಾಡಬೇಕೆಂಬುದೇ ಗೊತ್ತಿಲ್ಲ. ಇದು ವಿಚಾರವಂತರ ಲಕ್ಷಣವಲ್ಲ. ಅವರಿಗೆ ಭೂಷಣವೂ ಅಲ್ಲ ಎಂಬುದು ಪ್ರಗತಿಪರವಾದ. ಹಾಗಾಗಿ ಸಂಪ್ರದಾಯಗಳು ಅವೈಜ್ಞಾನಿಕ, ಅನೈತಿಕತೆ ಎಂಬಿತ್ಯಾದಿ ದೂರುಗಳನ್ನು ಪದೇಪದೇ ಕೇಳುತ್ತೇವೆ. ಆದರೆ ಇಂಥ ವಾದಗಳಿಗೆ ಸ್ಪಷ್ಟತೆ ಇಲ್ಲ. ಪಾಶ್ಚಾತ್ಯರು ಉಲ್ಲೇಖಿಸಿದಅದೆಷ್ಟೋ ಆಚರಣೆಗಳು ಇಂದು ಇಲ್ಲವೇ ಇಲ್ಲ. ತಾನಾಗೇ ಅಳಿದುಹೋಗಿದೆ. ಹಲವಷ್ಟನ್ನು ಕಾನೂನಿನಿಂದ ನಿಷೇಧಿಸಲಾಗಿದೆ. ಆದಾಗ್ಯೂ ನಮ್ಮ ಸಂಪ್ರದಾಯಗಳು ಅನಾಗರಿಕ ಎಂದು ಗಿಳಿಪಾಠ ಮಾಡುವುದರಲ್ಲಿ ಅರ್ಥವಿದೆಯೇ? ಸಂಪ್ರದಾಯಗಳಲ್ಲಿ ಇಷ್ಟೆಲ್ಲ ಕೆಡುಕುಗಳಿದ್ದರೆ ಭಾರತದೇಶ ಸಾವಿರಾರು ವರ್ಷ ಹೇಗೆ ಉಳಿದು ಬೆಳೆದು ಬಂದಿದೆ? ನಮಗೆ ನಮ್ಮ ಸಂಪ್ರದಾಯದ ಕುರಿತು ಈ ರೀತಿಯ ನಕಾರಾತ್ಮಾಕ ಭಾವನೆ ಬೆಳೆಯಲು ಕಾರಣವೇನು?
ನಾವು ಮನುಷ್ಯನ ಮುಂದುವರಿಕೆಯನ್ನು ಗುರುತಿಸುವುದು ಪಾಶ್ಚಾತ್ಯರು ಹಾಕಿಕೊಟ್ಟ ಮಾನದಂಡದ ಮೇಲೆ. ಅದಾವುದೆಂದರೆ ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಈ ಹಿನ್ನೆಲೆಯಲ್ಲಿ ಸೃಷ್ಟಿಸಿಕೊಂಡ ಹಲವು ತತ್ವಗಳು. ಅದಕ್ಕಾಗೇ ಪಶ್ಚಿಮದ ನಾಗರಿಕತೆ ನಮಗೆ ಪ್ರಗತಿಯ ಪ್ರತೀಕವಾಗಿ ಕಾಣುತ್ತದೆ. ಅವರನ್ನು ಅನುಕರಿಸಿ ಅವರಂತೆ ಆಗುವುದೇ ನಮ್ಮ ಪ್ರಗತಿಯ ಕನಸಾಗಿದೆ! ಭಾರತದ ಹಳೆಯದನ್ನೆಲ್ಲ ತ್ಯಜಿಸಿ ಪಾಶ್ಚಾತ್ಯರ ಹೊಸತ್ನನ ಅಳವಡಿಸಿಕೊಳ್ಳುತ್ತ ಹೋಗುವುದೇ ದೇಶದ ಪ್ರಗತಿ ಅಂದುಕೊಳ್ಳಲಾಗಿದೆ. ಇದಕ್ಕಾಗೇ ನಮ್ಮ ಸಂಪ್ರದಾಯಗಳು ಕನಿಷ್ಟ ಪಶ್ಚಿಮದ ಸಂಪ್ರದಾಯಗಳು ಶ್ರೇಷ್ಠ ಎಂದೆನಿಸುವುದು. ಆರತಿ ಎತ್ತಿ ಹುಟ್ಟುಹಬ್ಬ ಆಚರಿಸಿದರೆ ಹಿಂದುಳಿಯುವಿಕೆ, ಕೇಕ್ ಕತ್ತರಿಸಿ ‘ಹ್ಯಾಪಿ ಬರ್ತಡೆ’ ಅಂದರೆ ಮುಂದುವರಿದ ಲಕ್ಷಣ. ಯಾಕೆ ಹೀಗೆ? ಇದೆಲ್ಲ ಅರ್ಥವಾಗಬೇಕಾದರೆ ನಮ್ಮ ಮಸ್ತಕಕ್ಕೆ ಮೆತ್ತಿಕೊಂಡ ತಪ್ಪು ತಿಳುವಳಿಕೆಯನ್ನು ತೊಳೆದುಕೊಳ್ಳಬೇಕು.
ಪಾಶ್ಚಾತ್ಯರು ತಮ್ಮ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಕಣ್ಣಲ್ಲಿ ಭಾರತವನ್ನು ನೋಡಿದ್ದರು ಎಂಬುದನ್ನು ಗಮನಿಸಬೇಕು. ಮೂತರ್ಿಪೂಜೆ ಮಾಡುವವರು ನೀತಿಭ್ರಷ್ಟರು, ಮೂಢನಂಬಿಕೆಯವರು ಎಂಬುದು ಅವರ ಸಿದ್ಧಾಂತ. ಹಾಗಾಗಿ ಭಾರತೀಯರ ಸಂಪ್ರದಾಯಗಳೆಲ್ಲವೂ ಭ್ರಷ್ಟ ಧಾಮರ್ಿಕ ಆಚರಣೆಗಳೆಂಬ ಅರ್ಥದಲ್ಲಿ ನೋಡಿದರು. ಇದನ್ನೇ ಹಿಂದೂಯಿಸಂ ಎಂದು ಕರೆದರು. ಭಾರತೀಯ ಸಂಸ್ಕೃತಿ ಮೂಢ ಆಚರಣೆಯಲ್ಲಿ ಮುಳುಗಿ ಭ್ರಷ್ಟಗೊಂಡಿದೆ ಎಂಬರ್ಥದ ಇತಿಹಾಸ ಬರೆದರು. ಇದನ್ನೇ ಭಾರತದ ಸುಧಾರಣಾವಾದಿಗಳೂ ಕೂಡ ವೇದವಾಕ್ಯ ಎಂದು ನಂಬಿದರು. ಪಾಶ್ಚಾತ್ಯರಿಗೆ ನಮ್ಮ ಕುರಿತಾದ ಅನುಭವ ಹಾಗಿತ್ತು. ಅದನ್ನೇ ಬರೆದುಕೊಂಡರು. ನಮ್ಮ ‘ಅನುಭವ’ ಅವರ ಅನುಭವಕ್ಕಿಂತ ಬೇರೆ ಅನಿಸಲೇ ಇಲ್ಲ ನಮ್ಮವರಿಗೆ. ಇಂದಿಗೂ ಕೂಡ ಅನಿಸುತ್ತಿಲ್ಲ. ಅಷ್ಟರಮಟ್ಟಿಗೆ ವಸಾಹತು ಪ್ರಭಾವ ನಮ್ಮನ್ನು ಕುರುಡರನ್ನಾಗಿ ಮಾಡಿದೆ. ಇದೇ ಇಂದಿನ ವಿದ್ಯಾವಂತರ ಸಮಸ್ಯೆ.
ವಸಾಹತು ಆಳ್ವಿಕೆಯ ಕಾಲದಲ್ಲಿ ಹಾಗೂ ಆಧುನಿಕ ಭಾರತದಲ್ಲಿ ಸಾಂಪ್ರದಾಯಿಕ ಆಚರಣೆಗಳ ಕುರಿತು ಇದೇ ವಿಚಾರವಾದ ಮುಂದುವರಿಯುತ್ತಾ ಬಂದಿತು. ಪ್ರಗತಿಪರರು ಪಾಶ್ಚಾತ್ಯಚಿಂತನೆಗಳನ್ನು ಆಧಾರವಾಗಿಟ್ಟುಕೊಂಡು ಸಂಪ್ರದಾಯದ ಅರ್ಥಹೀನತೆಯನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದರು. ಸಂಪ್ರದಾಯಗಳನ್ನು ನೆಚ್ಚಿಕೊಂಡ ವಿದ್ಯಾವಂತರಿಗೆ ದೊಡ್ಡ ಸವಾಲೇ ಎದುರಾಯಿತು. ಆಗ ಅವರು ಸಂಪ್ರದಾಯಗಳಲ್ಲಿ ವೈಜ್ಞಾನಿಕ ಕಾರಣಗಳನು ಹುಡುಕಲು ಆರಂಭಿಸಿದರು. ಏಕೆಂದರೆ ಸಂಪ್ರದಾಯಗಳು ಅವೈಜ್ಞಾನಿಕ ಎಂಬ ಕಾರಣಕ್ಕೆ ಮೌಢ್ಯ ಎಂದದ್ದರಿಂದ ಅವನ್ನು ಸಂಪೂರ್ಣ ವೈಜ್ಞಾನಿಕರಣಗೊಳಿಸುವ ಪ್ರಯತ್ನ ನಡೆಯಿತು. ಯಜ್ಞ ಮಾಡುವುದು, ಮಂತ್ರ ಹೇಳುವುದು, ತೀರ್ಥ ಕುಡಿಯುವುದು- ಎಲ್ಲದಕ್ಕೂ ವೈಜ್ಞಾನಿಕ ಕಾರಣ ಹುಡುಕುವ ಪ್ರಯತ್ನ ನಡೆಯಿತು. ಆಗ ಅಲ್ಪಸ್ವಲ್ಪ ವಿಜ್ಞಾನ ತಿಳಿದವರಿಗೆ ಇದನ್ನು ನಂಬುವುದು ಇನ್ನೂ ಕಷ್ಟವಾಯಿತು. ಸಂಪ್ರದಾಯ ಮತ್ತು ವೈಜ್ಞಾನಿಕ ಕಾರಣಕ್ಕೆ ಏಕೆ ಸಂಬಂಧ ಇರಬೇಕು ಎಂದು ಯಾರೂ ಪ್ರಶ್ನಿಸಲೇ ಇಲ್ಲ.
ವಿದ್ಯಾವಂತರಾದಂತೆ ವೈಚಾರಿಕತೆ ಬೆಳೆಯುತ್ತದೆ. ಆದ್ದರಿಂದ ಸಂಪ್ರದಾಯ ಪಾಲಿಸಿದರೆ ತಮಗೆ ವೈಚಾರಿಕತೆ ಇಲ್ಲ ಎಂದು ತಿಳಿಯುತ್ತಾರೆಂಬ ಕೀಳರಿಮೆ ಅನೇಕ ವಿದ್ಯಾವಂತರಿಗಿದೆ. ಹಾಗಾದರೆ ಸಂಪ್ರದಾಯವಾದಿಗಳಿಗೆ ವೈಚಾರಿಕತೆಯೇ ಇಲ್ಲ ಅನ್ನೋಣವೇ? ಸಂಪ್ರದಾಯದ ಪರವಾಗಿದ್ದ ವಿದ್ಯಾವಂತರಲ್ಲಿ ವೈಜ್ಞಾನಿಕ ಪ್ರಜ್ಞೆ ಇಲ್ಲವೆಂದರ್ಥವೇ? ಎಷ್ಟೋ ವಿಜ್ಞಾನಿಗಳು ದೇವರ ಫೋಟೋ ಪೂಜಿಸುವುದು, ಹಣೆಗೆ ಕುಂಕುಮ ಇಡುವುದು ಇತ್ಯಾದಿಗಳನ್ನು ನೋಡುತ್ತೇವೆ. ಅಂದಾಕ್ಷಣ ಅವರು ವಿಜ್ಞಾನಿಗಳಲ್ಲ. ಅವರಿಗಿಂತ ಸಂಪ್ರದಾಯಬಿಟ್ಟವರೇ ವಿಜ್ಞಾನಿಗಳೆಂದು ಒಪ್ಪಿಕೊಳ್ಳಲು ಸಾಧ್ಯವೇ? ಸಂಪ್ರದಾಯ ಅವೈಜ್ಞಾನಿಕವಾಗಿದ್ರೆ ಸಂಪ್ರದಾಯದ ಭಾರತದಲ್ಲಿ ಎಷ್ಟೆಲ್ಲ ವಿಜ್ಞಾನ ಹೇಗೆ ಬೆಳೆಯುತ್ತಿತ್ತು? ಶಾಸ್ತ್ರೋಕ್ತ ಪೂಜೆ ಮಾಡಿ ರಾಕೆಟ್ ಹಾರಿಸಿದರೆ ಪೂಜೆ ಮಾಡಿದ್ದರಿಂದ ರಾಕೆಟ್ ಹಾರಿತು ಎಂಬುದು ಎಷ್ಟು ಹಾಸ್ಯಾಸ್ಪದವೋ ಪೂಜೆ ಮಾಡುವುದರಿಂದ ರಾಕೆಟ್ ಹಾರುವುದಿಲ್ಲ ಎಂಬ ವಾದವೂ ಅಷ್ಟೇ ಹಾಸ್ಯಾಸ್ಪದ. ಇಲ್ಲಿ ಎಂಥವನಿಗೂ ಸ್ಪಷ್ಟವಾಗುತ್ತದೆ. ರಾಕೆಟ್ಗ ಪೂಜೆ ಮಾಡುವುದು ನಮ್ಮ ಸಂಪ್ರದಾಯ ಹಾಗೂ ನಂಬಿಕೆ. ರಾಕೆಟ್ ಹಾರುವುದು ವಿಜ್ಞಾನದಿಂದ. ಹೀಗಿದ್ದಾಗ ಮುಜುಗರ ಪಡುವುದು ಏನಿದೆ? ಹಾಗಾಗಿ ಸಂಪ್ರದಾಯ ಬೇರೆ, ವಿಜ್ಞಾನ ಬೇರೆ, ವೈಚಾರಿಕತೆ ಬೇರೆ. ಇವೆಲ್ಲವೂ ಒಟ್ಟಿಗೇ ಇರಬೇಕೆಂದೇನೂ ಇಲ್ಲ. ಒಟ್ಟಿಗೆ ಇರಬಾರದೆಂಬ ನಿಯಮವೂ ಇಲ್ಲ. ಇದು ಮುಂದುವರಿದಿರುವಿಕೆ ಅಥವಾ ಹಿಂದುಳಿದಿರುವಿಕೆಯನ್ನು ನಿರ್ಧರಿಸಲಾರದು.
ವಿಜ್ಞಾನ ಶ್ರೇಷ್ಟ ಎಂದು ನಂಬಿಕೊಂಡಾಕ್ಷಣ ಸಂಪ್ರದಾಯ ಕನಿಷ್ಠ ಎಂದು ಏಕೆ ಭಾವಿಸಬೇಕು? ವಿಜ್ಞಾನ ಬೇರೆ ಸಂಪ್ರದಾಯ ಬೇರೆ. ವಿಜ್ಞಾನ ಈ ಪ್ರಪಂಚದ ಕುರಿತು ಜ್ಞಾನಗಳಿಸುವ ಸಾಧನವಾದರೆ ಸಂಪ್ರದಾಯ ಈ ಸಮುದಾಯ ಕಟ್ಟುವ ಸಾಧನವಾಗಿದೆ. ಜಗತ್ತಿನಲ್ಲಿ ಸಮುದಾಯ ಜೀವನನ ಎಲ್ಲೆಲ್ಲಿದೆಯೋ ಅಲ್ಲೆಲ್ಲ ಒಂದಲ್ಲ ಒಂದು ರೀತಿಯ ಸಂಪ್ರದಾಯ ಇದ್ದೇ ಇದೆ.
ಸಂಪ್ರದಾಯ ಅಂದರೆ ಏನೆಂದು ಯಾರಾದರೂ ನಮ್ಮನ್ನು ಕೇಳಿದರೆ ತಕ್ಷಣ ಎತ್ತರಿಸಲು ಸಾಧ್ಯವಾಗದು. ಏಕೆಂದರೆ ಸಂಪ್ರದಾಯ ಇರುವುದು ಆಚರಿಸಲಿಕ್ಕೇ ವಿನಾ ಅದರ ಕುರಿತು ವ್ಯಾಖ್ಯಾನ ನೀಡಲಿಕ್ಕಲ್ಲ. ಸಂಪ್ರದಾಯದ ಲಕ್ಷಣಗಳೇ ಅದರ ಶಕ್ತಿಯನ್ನು ಸೂಚಿಸುತ್ತವೆ.
1. ಸಂಪ್ರದಾಯಗಳು ಆಚರಣೆಯಲ್ಲೇ ಅಸ್ತಿತ್ವವನ್ನು ಹೊಂದಿರುತ್ತವೆಯೇ ವಿನಾ ಯಾವುದೇ ವೈಜ್ಞಾನಿಕ ಸಿದ್ಧಾಂತಗಳನ್ನಾಧರಿಸಿಯಲ್ಲ. ಇದಕ್ಕೆ ಸಿದ್ಧ ಶಾಸನಗಳಿಲ್ಲ. ಹಿಂದಿನವರನ್ನು ನೋಡಿ ಆಚರಣೆಗಳನ್ನು ಕಲಿಯಲಾಗುತ್ತದೆ.
2. ಕಾಲಕ್ಕೆ ತಕ್ಕಂತೆ ಬದಲಾಗುವುದೇ ಸಂಪ್ರದಾಯದ ಗುಣ. ನಾವು ಸಂಪ್ರದಾಯವನ್ನು ಪಾಲಿಸುವುದೊಂದೇ ಅಲ್ಲ, ಅದನ್ನು ಬದಲಿಸುತ್ತಲೂ ಇರುತ್ತೇವೆ. ಹೀಗಿದ್ದಾಗ ಸಂಪ್ರದಾಯ ನಿಂತ ನೀರಿನಂತೆ ಅನ್ನುವುದು ಯಾವ ಸೀಮೆಯ ವೈಚಾರಿಕತೆ?
3. ಸಂಪ್ರದಾಯಗಳು ಇದನ್ನು ಹೀಗೇ ಮಾಡಬೇಕೆಂದು ಕಟ್ಟಳೆ ಹೇರುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತೇವೆ.
4. ಸಂಪ್ರದಾಯಗಳು ಅವುಗಳ ಆಚರಣೆಗೆ ವಿಶೇಷ ಅರ್ಥ ವ್ಯಾಖ್ಯಾನ ನೀಡುವುದಿಲ್ಲ.
5. ಒಂದು ಸಂಪ್ರದಾಯ ಯಾವತ್ತೂ ಇನ್ನೊಂದು ಸಂಪ್ರದಾಯವನ್ನು ದ್ವೇಷಿಸುವುದಿಲ್ಲ, ಗೌರವಿಸುತ್ತದೆ.
Recent Comments